Tagged: Subramanya Yadapadithaya

ಮಂಗಳೂರು ವಿವಿ: ಗಡಿನಾಡ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ

ಹೊರ ರಾಜ್ಯದಲ್ಲಿ1ರಿಂದ 10ರವರೆಗೆ ಪ್ರೌಢ ಶಿಕ್ಷಣ ವನ್ನು ಪಡೆದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶೇ.೫ಮೀಸಲಾತಿ ನೀಡಲು ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗಡಿನಾಡು ಮತ್ತು ರಾಜ್ಯದ ಹೊರಗೆ ಕನ್ನಡ ಮಾಧ್ಯಮ ದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಸೀಟುಗಳನ್ನು ಕಾಯ್ದಿರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾ ರದ ಸುತ್ತೋಲೆಯ ಪ್ರಕಾರ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಲು ನಿರ್ಧರಿ ಸಲು ತೀರ್ಮಾನಿಸಿದೆ ಎಂದು ಕುಲಪತಿ ಪಿ.ಎಸ್. ಯಡ ಪಡಿತ್ತಾಯ ತಿಳಿಸಿದ್ದಾರೆ.