Tagged: mobile

ಕುಡ್ಲ ಸಿಟಿ ದಸರಾ ಮೊಬೈಲ್ ಫೋಟೊ ಗ್ರಾಫರ್ ಕಾಂಟೆಸ್ಟ್

ದಸರಾ ಹಬ್ಬದ ಸಂಭ್ರಮ ಎಂದರೆ ಬರೀ ರಾಜ್ಯಕ್ಕೆ ಮಾತ್ರವಲ್ಲ ಕರಾವಳಿಗೂ ಅದೇ ಸಡಗರ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಮುಂಚೂಣಿಯ ಸ್ಥಾನಗಿಟ್ಟಿಸಿಕೊಂಡಿರುವ ಕುಡ್ಲ ಸಿಟಿ ಫೇಸ್ ಬುಕ್ ಪೇಜ್ ಈ ಬಾರಿ ಕುಡ್ಲ ಸಿಟಿ ದಸರಾ ಮೊಬೈಲ್ ಫೋಟೋಗ್ರಫಿ ಎನ್ನುವ ವಿಶಿಷ್ಟ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ಸ್ ಇರುವುದರಿಂದ ಈ ಸ್ಪರ್ಧೆಗೆ ಸ್ಪರ್ಧಿಸುವುದು ಎಲ್ಲರಿಗೂ ಬಹಳ ಸುಲಭ. ನವರಾತ್ರಿ,ದಸರಾ ಸಮಯದಲ್ಲಿ ತಮಗೆ ತೋಚುವ ಯಾವುದೇ ವೇಷಗಳು,ಆಹಾರ-ವಿಚಾರಗಳು, ಬಣ್ಣದ ಬೆಳಕು, ಸಂಸ್ಕೃತಿ, ದೇವಸ್ಥಾನ, ಉಡುಗೆ- ತೊಡುಗೆ, ಅಲಂಕಾರ ಹೀಗೆ ನಿಮ್ಮ ಆಯ್ಕೆಯ ಯಾವುದೇ ವಸ್ತುಗಳಿರಲಿ ಅದನ್ನು ಮೊಬೈಲ್‌ನಲ್ಲಿ ತೆಗೆದು ಕಳುಹಿಸಿಕೊಡಬಹುದು. ಸ್ಪರ್ಧೆಯ ನಿಯಮಗಳು: * ಮೊಬೈಲ್‌ನಲ್ಲಿ ತೆಗೆದ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. *ಒಬ್ಬರು 5 ಚಿತ್ರಗಳನ್ನು ನಾನಾ ವಿಚಾರಗಳ ಮೇಲೆ ತೆಗೆದು ಒಂದೇ ಬಾರಿಗೆ ಕಳುಹಿಸಬೇಕು. ಬೇರೆ ಬೇರೆಯಾಗಿ ಕಳುಹಿಸಿದರೆ ಪರಿಗಣಿಸಲಾಗುವುದಿಲ್ಲ. * ಕಳುಹಿಸುವ ಮಂದಿ ತಮ್ಮ ಫೇಸ್‌ಬುಕ್ ಐಡಿ, ಇನ್‌ಸ್ಟ್ರಾಗ್ರಾಮ್ ಐಡಿ(ಇದ್ದರೆ ಮಾತ್ರ), ವಿಳಾಸ, ಮೊಬೈಲ್ ಸಂಖ್ಯೆಯನ್ನು ಪೂರ್ಣವಾಗಿ ಚಿತ್ರ ಕಳುಹಿಸುವ ಸಂದರ್ಭದಲ್ಲಿ ಬೇಕು. * ಚಿತ್ರಗಳನ್ನು ಅಕ್ಟೋಬರ್ 8,2019 ರೊಳಗೆ ಕಳುಹಿಸಬೇಕು. *ಕಳುಹಿಸಿದ ಚಿತ್ರಗಳಲ್ಲಿ ಉತ್ತಮವಾದ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಕುಡ್ಲ ಸಿಟಿಯಲ್ಲಿ ಪ್ರಕಟ ಮಾಡಲಾಗುತ್ತದೆ. ಹೀಗೆ ಪ್ರಕಟವಾದ ಚಿತ್ರಗಳನ್ನು ಒಂದು ವಾರದ ಕಾಲ ಅವಕಾಶ ನೀಡಲಾಗುತ್ತದೆ. * ಕಳುಹಿಸಿದವರು ಕುಡ್ಲ ಸಿಟಿ ಪೇಜ್‌ವನ್ನು ಲೈಕ್ ಮಾಡಬೇಕು. * ನಿಮ್ಮ ಚಿತ್ರಗಳನ್ನು ಫೇಸ್‌ಬುಕ್ ಹಾಗೂ ಇನ್ಸ್‌ಸ್ಟ್ರಾಗ್ರಾಮ್ ಐಡಿಗೆ ಟ್ಯಾಗ್ ಮಾಡಲಾಗುತ್ತದೆ. ಅತೀ ಹೆಚ್ಚು ಲೈಕ್, ಶೇರ್ ಪಡೆದ ಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಸಿಗಲಿದೆ. * ಕಳುಹಿಸಬೇಕಾದ ವ್ಯಾಟ್ಸಾಫ್ ನಂಬರ್ : 8073630041

ಶಿಲ್ಪಾರ ಮೊಬೈಲ್ ಕ್ಯಾಂಟೀನ್‌ಗೆ ಫಿದಾ ಆದ ಉದ್ಯಮಿ ಮಹೇಂದ್ರ!

ಇವರು ಶಿಲ್ಪಾ ರಾಜಶೇಖರ್. ಮಂಗಳೂರಿನಲ್ಲಿ ಮೊಬೈಲ್ ಕ್ಯಾಂಟೀನ್ ಉದ್ಯಮ ನಡೆಸುತ್ತಿದ್ದಾರೆ. ಮಹೇಂದ್ರ ಎನ್ನುವ ಕಾರ್ಪೊರೇಟ್ ಕಂಪನಿಯ ಮಾಲೀಕ ಮಹೇಂದ್ರ ಅವರೇ ಇವರು ಬಿಸಿನೆಸ್‌ಗೆ ಮನಸೋತು ವ್ಯಾಪಾರ ನಡೆಸಲು ಮಹೇಂದ್ರ ವಾಹನವೊಂದನ್ನು ಗಿಫ್ಟ್ ಆಗಿ ನೀಡಿದ್ದರು.
ಮೂಲತಃ ಹಾಸನ ಜಿಲ್ಲೆಯವರಾದ ಶಿಲ್ಪಾ ತಮ್ಮ ಪತಿ ರಾಜಶೇಖರ್ ಜತೆಯಲ್ಲಿ ಮಂಗಳೂರಿಗೆ ಬಂದಿದ್ದರು. ಆದರೆ ರಾಜಶೇಖರ್ ನಾಪತ್ತೆಯಾದರು. ತಮ್ಮವರು ಎಂದು ಹೇಳುವ ಎಲ್ಲರೂ ಕೈಕೊಟ್ಟರು.
ಮೂರು ವರ್ಷದ ಮಗುವಿನ ಜತೆಯಲ್ಲಿ ಬದುಕಿಗಾಗಿ ಗುದ್ದಾಟ ನಡೆಸಿಕೊಂಡು ಬಂದು ಕೊನೆಗೆ ಹಳ್ಳಿಮನೆ ರೊಟ್ಟೀಸ್ ಎನ್ನುವ ಪುಟ್ಟ ಮೊಬೈಲ್ ಕ್ಯಾಂಟೀನ್ ಹಾಕಿದರು. ಈಗಲೂ ಮಣ್ಣಗುಡ್ಡದ ಗಾಂಧಿನಗರದ ಕಡೆಗೆ ಹೋಗುವಾಗ ಈ ಕ್ಯಾಂಟೀನ್‌ಯಿದೆ.
ಈಗ ಶಿಲ್ಪಾ ಬದುಕು ಗಟ್ಟಿಯಾಗಿದೆ. ಹಳ್ಳಿಮನೆ ಶಿಲ್ಪಾ ಎಂದಾಕ್ಷಣ ಮಂಗಳೂರು ಮಂದಿಗೆ ಅವರ ಪರಿಚಯ ಆಗಿ ಬಿಡುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಸೋತು ಹೋದ ಹೆಣ್ಣು ಮಗಳು ಬದುಕು ಕಟ್ಟಿದ ರೀತಿಯಂತೂ ಅದ್ಬುತ ಎನ್ನಬಹುದು.