ಜಗತ್ತಿನ ಬಹುತೇಕ ಹಣ್ಣುಗಳ ರಸ, ಸುವಾಸನೆ ಗಳನ್ನು ಕೃತಕವಾಗಿ ತಯಾರಿಸಬಹುದು. ಆದರೆ, ಓಲೆ ಬೆಲ್ಲ ಮಾತ್ರ ಯಾವುದೇ ಕೃತಕ ವಿಧಾನಗಳಿಂದಲೂ ಸೃಷ್ಟಿಸಲಾಗದ ಅಪ್ಪಟ ದೇಸೀ ಉತ್ಪನ್ನ. ಅಚ್ಚುಬೆಲ್ಲ ಮತ್ತು ನೀರು ನೀಡಿ ಅತಿಥಿಗಳನ್ನು ಸ್ವಾಗತಿಸುವುದು ತುಳುನಾಡಿನ ಜನರ ಸಂಪ್ರದಾಯದ ಒಂದು ಭಾಗವಾದರೆ ಓಲೆಬೆಲ್ಲ ಶಾರೀರಿಕ ಆರೋಗ್ಯದ ವಿಚಾರದಲ್ಲಿ ವಿಶೇಷ ಮಹತ್ವ, ಸ್ಥಾನಮಾನ ಪಡೆದುಕೊಂಡಿದೆ. ಹೆರಿಗೆಯ ಬಳಿಕ ನಡೆಸಬೇಕಾದ ಬಾಣಂತನದಲ್ಲಂತೂ ಓಲೆ ಬೆಲ್ಲವೇ ಪ್ರಧಾನ.
ಅದೂ ಆಧುನಿಕತೆಯ ಈ ಕಾಲದಲ್ಲಯೂ ಸಹ ಉಳಿದುಕೊಂಡಿದೆ. ಕ್ಯಾಲ್ಸಿಯಂ ಹೇರಳವಾಗಿರುವ ಓಲೆಬೆಲ್ಲ ದೇಹದ ಹಲವಾರು ಸಮಸ್ಯೆಗಳಿಗೆ ನಾಟಿ ಹಾಗೂ ಆಯುರ್ವೇದ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತದೆ. ಬಾಯಿ ಸಿಹಿ ಮಾಡಿಕೊಂಡೇ ಆರೋಗ್ಯ ನೀಡುವ ಓಲೆಬೆಲ್ಲ ನಮಗೆ ಅವಶ್ಯಕವೆನಿಸಿದೆ.
Tagged: language
ಎಸ್ಸೆಸ್ಸೆಲ್ಸಿ ತುಳು ಭಾಷೆಯಲ್ಲಿ 100 ರಿಸಲ್ಟ್
ಎಸ್ಸೆಸ್ಸೆಲ್ಸಿ ಫಲಿತಾಂಶ ಈಗಾಗಲೇ ಹೊರಬಿದಿದ್ದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಈ ಬಾರಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 617 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದಾರೆ.
ಅದರಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ. 100 ಫಲಿತಾಶ ದಾಖಲಾಗಿದೆ. ಅದರಲ್ಲಿಯೂ 63 ವಿದ್ಯಾರ್ಥಿಗಳು ನೂರಕ್ಕೆ100 ಅಂಕ ಪಡೆದಿದ್ದಾರೆ.ಉಭಯ ಜಿಲ್ಲೆಗಳ ಒಟ್ಟು 41 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ. ತುಳುವಿನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯ ಒಟ್ಟು ಫಲಿತಾಶದಲ್ಲಿ ಏರಿಕೆ ಕಂಡುಬಂದಿದೆ.