Tagged: fruit

ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರಿನ ಹರೇಕಳದ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಇಡೀ ತುಳುನಾಡಿಗೆ ಮಾತ್ರವಲ್ಲ ಇಡೀ ಕರ್ನಾಟಕ ಇದು ಹೆಮ್ಮೆಯ ವಿಚಾರ.
ಅಂದಹಾಗೆ ಇವರು ಕೋಟ್ಯಾಧಿಪತಿಯಲ್ಲ. ಉನ್ನತ ವಿದ್ಯಾಭ್ಯಾಸವಂತೂ ಅವರಿಗೆ ದೂರದ ಬೆಟ್ಟವಾದರೂ ಪಕ್ಕಾ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು.

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 150 ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಅವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆಗೆ ಅನುದಾನ ತಂದು ಕೊಡುವ ಕೆಲಸದಲ್ಲಿ ಯಶಸ್ಸು ಪಡೆದವರು.
ವಿಶೇಷ ಎಂದರೆ ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಹಾಜಬ್ಬ ಅವರನ್ನು ಆಯ್ಕೆ ಮಾಡಿದ ನಂತರ ಅವರು ನಾನಾ ಇಲಾಖೆಗಳಿಗೆ ಭೇಟಿ ಕೊಟ್ಟು ಅನುದಾನ ಕೊಡುವ ತನಕನೂ ಅಲ್ಲಿಂದ ಕದಲದೇ ಅಧಿಕಾರಿಗಳು ಕೊನೆಗೆ ಅನುದಾನ ಮಂಜೂರು ಮಾಡುವಂತಹ ಸ್ಥಿತಿಗೆ ತಂದು ಬಿಟ್ಟಿದ್ದರು. ನಿಜವಾಗಿಯೂ ಅವರ ಹೋರಾಟದ ಬದುಕು ಈಗ ಜಗತ್ತು ಅರಿತಿದೆ.

ಪರಿಸರದೊಂದಿಗೆ ಪ್ರೀತಿಯ ಸ್ವಾತಂತ್ರ್ಯ ಆಚರಿಸಿ

ಪರಿಸರ ಹಾಗೂ ಸ್ವಾತಂತ್ರ್ಯಕ್ಕೆ ಎಲ್ಲಿಂದ ಎಲ್ಲಿ ಸಂಬಂಧ ಅಂದುಕೊಳ್ಳಬೇಡಿ. ಮಕ್ಕಳು ಕೈಯಲ್ಲಿ ಪ್ಲಾಸ್ಟಿಕ್ ಬಾವುಟ ಹಿಡಿದುಕೊಂಡು ಪರಿಸರಕ್ಕೆ ಹಾನಿ ಮಾಡುವುದು ಪ್ರತಿ ವರ್ಷನೂ ನಡೆದುಕೊಂಡು ಬರುವ ವಿಚಾರ. ಆದರೆ ಈ ಬಾರಿಯಂತೂ ಪರಿಸರದ ಜತೆಯಲ್ಲಿ ಸ್ವಾತಂತ್ರ್ಯವನ್ನು ಆಚರಿಸಲು ಪಕ್ಷಿಕರೆಯ ನಿತಿನ್ ವಾಸ್ ಸೂಪರ್ ಐಡಿಯಾ ನೀಡಿದ್ದಾರೆ ಅದನ್ನು ಫಾಲೋ ಮಾಡಿಕೊಂಡು ಹೋದರೆ ಬಾವುಟದಲ್ಲೂ ಗಿಡ ಬೆಳೆಸಬಹುದು.
ಹಳೆಯ ರದ್ದಿ ಪೇಪರ್‌ಗಳನ್ನು ಸಂಗ್ರಹಿಸಿ ಹಳೆಯ ವಿಧಾನಗಳನ್ನು ಬಳಸಿ ಹೊಸದಾಗಿ ಪೇಪರ್ ತಯಾರಿಸಿ ಇದರಿಂದ ಆಮಂತ್ರಣ ಪತ್ರಿಕೆ, ಬುಕ್ ಪ್ಯಾಡ್, ಜುವೆಲ್ಲರಿ ಬಾಕ್ಸ್, ಡಿಸೈನ್ ಬೌಲ್, ವಿಗ್ರಹಗಳು, ಪೆನ್‌ಸ್ಟ್ಯಾಂಡ್, ಪೆನ್ಸಿಲ್, ಪೆನ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ. ಬಳಕೆಯ ನಂತರ ಪೇಪರ್ ತಯಾರಿಸುವಾಗ ಅದಕ್ಕೆ ನಾನಾ ಜಾತಿಯ ಹೂವಿನ ಗಿಡಗಳ ಹಾಗೂ ತರಕಾರಿ ಬೀಜಗಳನ್ನು ಅಳವಡಿಸುತ್ತಾರೆ. ಇವುಗಳನ್ನು ಮಣ್ಣಲ್ಲಿ ಹಾಕಿದರೆ ಮೊಳಕೆ ಒಡೆದು ನಾನಾ ಜಾತಿಯ ಹೂ, ತರಕಾರಿ ಗಿಡಗಳಾಗಿ ಬೆಳೆಯುತ್ತದೆ.