ಕಾರ್ನಾಡ್ ಸದಾಶಿವ ರಾವ್ ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವರಿವರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ. ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.
1936 ರಲ್ಲಿ ಫೈಜಾಬಾದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬಯಿಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9 ರಂದು ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು.
ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು ಧರ್ಮರಾಜ ಅಂತ ಕರೆದಿದ್ದರು. ಅಂದಹಾಗೆ ಅವರ ನೆನಪಿಗಾಗಿ ಕುಡ್ಲದ ಕೆ.ಎಸ್.ರಾವ್ ರಸ್ತೆ ಅವರ ನೆನಪಿಗಾಗಿ ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳು, ಬ್ಯಾಂಕ್ಗಳು ಕಾರ್ಯಾಚರಿಸುತ್ತಿದೆ.
pics: Nandan Bhat
Tagged: family
ನೇರಳೆ ಹಣ್ಣು ಮಾರುವ ಷಣ್ಮುಗ ಬಿಸಿನೆಸ್ ಟೆಕ್ನಿಕ್
ಕುಡ್ಲ ಸಿಟಿಯೊಳಗೆ ನೇರಳೆ ಹಣ್ಣು ಎಂಟ್ರಿಯಾಗಿದೆ. ಸೆಂಟ್ರಲ್ ಮಾರ್ಕೆಟ್ ಹೊರಭಾಗದಲ್ಲಿ ನೇರಳೆಹಣ್ಣು ಮಾರುವ ಮೂರು ನಾಲ್ಕು ಮಂದಿಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ವ್ಯಕ್ತಿ ಷಣ್ಮುಗ.
ವರ್ಷ 70 ದಾಟಿದರೂ ಕೂಡ ಬಿಸಿಲಿಗೆ ಕೂತು ನೇರಳೆಹಣ್ಣು ಮಾರುವ ಇವರು ಮಂಗಳೂರಿನ ಕಾರ್ಸ್ಟ್ರೀಟ್ ಕಡೆಯವರು ಅವರು 40 ವರ್ಷಗಳಿಂದ ಇಂತಹ ಹಣ್ಣುಗಳನ್ನು ಮಾರಾಟ ಮಾಡುವುದೇ ವ್ಯಾಪಾರ.
ಬರೀ ಒಂದು ತಿಂಗಳ ಕಾಲ ಮಾತ್ರ ಅವರು ನೇರಳೆ ಹಣ್ಣು ಮಾರುತ್ತಾರೆ. ಉಳಿದ ತಿಂಗಳುಗಳ ಕಾಲ ಉಳಿದ ಚಾಕಲೇಟ್ ಸೇರಿದಂತೆ ನಾನಾ ವ್ಯಾಪಾರ ಮಾಡುತ್ತಾರೆ. ತಿಂಗಳಿಗೊಂದು ವ್ಯಾಪಾರ ಷಣ್ಮುಗ ಅವರ ಬಿಸಿನೆಸ್ ಟೆಕ್ನಿಕ್.
ಈಗ ನೇರಳ ಹಣ್ಣಿನ ಸೀಸನ್ ಕಾಲು ಕೆಜಿಗೆ 7೦ ರೂನಂತೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಹುಬ್ಬಳ್ಳಿ, ತಿರುಪತಿಯಿಂದ ಈ ಹಣ್ಣುಗಳು ಬರುತ್ತದೆ. ಕರಾವಳಿಯಲ್ಲಿ ನೇರಳೆ ಹಣ್ಣು ದೊಡ್ಡ ಪ್ರಮಾಣದ್ಲಿ ಸಿಗುವುದಿಲ್ಲವಂತೆ ಕಳೆದ ಆರು ವರ್ಷಗಳಿಂದ ಕರಾವಳಿ ನೇರಳೆಹಣ್ಣು ಮಾರುಕಟ್ಟೆಗೆ ಬಂದಿಲ್ಲ ಎನ್ನುವುದು ಅವರ ಮಾತು.
ಅಂದಹಾಗೆ ನೇರಳೆಹಣ್ಣಿನ ಮಾರಾಟ ಸಮಯದಲ್ಲಿ ಷಣ್ಮುಗ ಅವರು ಹೇಳುವ ಒಂದೇ ಮಾತು ನೇರಳೆಹಣ್ಣು ಔಷಧೀಯ ಗುಣವನ್ನು ಹೊಂದಿದೆ ಎಂದು ಟಿವಿಯಲ್ಲಿ ಬರ್ತಾ ಇರುತ್ತದೆ ಎನ್ನುವುದು ಅವರ ಮಾತು.
ಅವರು ಹೇಳುವಂತೆ ನೇರಳೆಹಣ್ಣು ಸಕ್ಕರೆ ಕಾಯಿಲೆಗೆ, ರಕ್ತ ಹೀನತೆ, ರಕ್ತದ ಶುದ್ಧಿಕರಣ, ರಕ್ತದ ಒತ್ತಡ ತಗ್ಗಿಸುವುದು, ಹೊಟ್ಟೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಹತ್ತಾರು ರೋಗಗಳಿಗೆ ಇದು ದಿವ್ಯ ಔಷಧವಾಗಿದೆ.