ಮಳೆಗಾಲ ಎನ್ನುವ ಮಾತು ಕುಡ್ಲಕ್ಕೆ ಸರಿಯಾಗಿ ಅನ್ವಯವಾಗಲೇ ಇಲ್ಲ. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಕುಡ್ಲದ ಜನರಿಗೆ ರಿಯಲ್ ಮಳೆಗಾಲವನ್ನು ನೆನಪಿಸಿತು. ಬಹಳ ದಿನಗಳ ನಂತರ ಕುಡ್ಲದ ಜನರು ಎಂಚಿನ ಬರ್ಸಾ ಮಾರಾಯ್ರೆ ನನಲಾ ಬೋಡು( ಎಂತಹ ಮಳೆ ಮಾರಾಯ್ರೆ ಇನ್ನಷ್ಟು ಬರಲಿ) ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಲು ಸಿಕ್ಕಿದೆ. ಮಳೆರಾಯನ ಅದ್ಭುತ ಆಟ ಕ್ರಿಕೆಟ್, ರಾಜಕೀಯಕ್ಕಿಂತಲ್ಲೂ ವಿಶೇಷ ದಾಖಲೆಯಾಗಿದೆ.
Tagged: cricket
ಕುಡ್ಲದ ಹುಡುಗನ ಭರ್ಜರಿ ಸೆಂಚುರಿಯಾಟ
ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 111 ರನ್ ಗಳನ್ನು ಸಿಡಿಸುವ ಮೂಲಕ ವಿಶ್ವ ಕಪ್ ನಲ್ಲಿ ತನ್ನ ಮೊದಲ ಶತಕ ದಾಖಲಿಸಿಕೊಂಡರು. ಅವರು ಬೇಸಿಕಲಿ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಶತಕದ ಮೂಲಕ ವಿಶ್ವಕಪ್ ನಲ್ಲಿ ಭಾರತಕ್ಕೆ ಗೆಲುವಿನ ದಡ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.