Tagged: kudlanews

ಬೊಕ್ಕಪಟ್ಣದಲ್ಲಿ ಬಾಟಲ್‌ಗೊಂದು ಆರ್ಟ್ ಕ್ಯಾಂಪ್

ಮನೆ, ಹೋಟೆಲ್, ಬಾರ್, ಅಂಗಡಿ ಮಳಿಗೆ ಗಳಲ್ಲಿ ದ್ರವ್ಯ ಪದಾರ್ಥಗಳನ್ನು ಖರೀದಿಸಿ ಉಪಯೋಗ ಆದ ನಂತರ ಅದೇ ಬಾಟಲ್‌ಗಳನ್ನು ತ್ಯಾಜ್ಯ ಎಂದು ಬೀದಿ, ನದಿ, ಸಮುದ್ರಕ್ಕೆ ಎಸೆದು ಮಾಲಿನ್ಯ ಗೊಳಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಈ ಬಾಟಲ್ ಗಳು ಅಂತರ್ಜಲ ಮತ್ತು ಜಲಚರ ಜೀವಿಗಳ ನೆಮ್ಮದಿಗೆ ಸಮಸ್ಯೆ ಆಗುತ್ತಿವೆ.

ಮಂಗಳೂರಿನ ಬೊಕ್ಕ ಪಟ್ಣದ ಕಲಾವಿದೆ ಮೇಘ ಮೆಂಡನ್ ಈ ತರದ ತ್ಯಾಜ್ಯ ಬಾಟಲಿಗಳಲ್ಲಿ ಚಿತ್ರ ಬರೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿ ಅದರ ಮೇಲೆ ಹೂ ಇಟ್ಟು ಅದು ಮನೆಯ ಅಂದ ಹೆಚ್ಚಾಗುವ ರೀತಿಯಲ್ಲಿ ಹೊಸ ಒಂದು ಕಲಾ ಆವಿಷ್ಕಾರ ಮಾಡುತ್ತಾರೆ.
ಸ್ವಚ್ಛ ಭಾರತದ ಒಂದು ಪಾತ್ರವಾಗಿ ಮನೆ, ಮನೆಯ ಬಾಟಲ್ ತ್ಯಾಜ್ಯಗಳು ಮನೆ, ಮನೆಯಲ್ಲೇ ಉಪಯೋಗ ಆದರೆ ಬೀದಿ, ನದಿ, ಸಾಗರಕ್ಕೆ ಸೇರುವ ತ್ಯಾಜ್ಯ ಕಡಿಮೆ ಆಗಿ ಪರಿಸರಕ್ಕೆ ನೀಡುವ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂಬ ಹಿತ ದೃಷ್ಟಿಯಲ್ಲಿ ಇದೀಗ ಈ ಬಾಟಲ್ ಚಿತ್ರ ಕಲೆಯ ಶಿಬಿರವನ್ನು ಬೊಕ್ಕ ಪಟ್ಣದ ಫಲ್ಗುಣಿ ನದೀ ಕಿನಾರೆಯಲ್ಲಿ ಆರಂಭಿಸಿದ್ದಾರೆ. ಮೇ 5, 12, 19, 20 ರಂದು ಬೆಳಗ್ಗೆಯಿಂದ ಮಧ್ಯಾನ ತನಕ ಈ ಶಿಬಿರ ಜರುಗಲಿದೆ.

47 ವರ್ಷದಲ್ಲಿ 12,260 ಜೋಡಿಗಳಿಗೆ ಮದುವೆ !

ಇದು ಎಲ್ಲರಿಂದ ಸಾಧ್ಯವಿಲ್ಲದ ಮಾತು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾಧ್ಯ. ಕಳೆದ 47 ವರ್ಷದ ಧರ್ಮಸ್ಥಳದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭರ್ತಿ 12,260 ಮಂದಿ ಜೋಡಿಗಳು ಮದುವೆಯಾಗುವ ಮೂಲಕ ಸತಿ ಪತಿಗಳಾಗಿದ್ದಾರೆ.

ಈ ಬಾರಿ 48 ನೇ ವರ್ಷದ ಸಾಮೂಹಿಕ ವಿವಾಹ ನಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೇ 1ರಂದು ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತ ದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, 102 ಜೋಡಿ ಹಸೆಮಣೆ ಏರಲಿದ್ದಾರೆ.

ವಿವಾಹ ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆದು ಕುಟುಂಬದಲ್ಲಿ ಸುಖ- ಶಾಂತಿ ಕಾಣಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಸಾಮೂಹಿಕ ಉಚಿತ ವಿವಾಹವನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾರಂಭಿಸಿ ದರು. ಸಮಾಜದ ಹಿತಕ್ಕಾಗಿ ಶ್ರೀಕ್ಷೇತ್ರದ ಮೂಲಕ ಹತ್ತು ಹಲವಾರು ಕಾರ‍್ಯಕ್ರಮಗಳು ಅನುಷ್ಠಾನಗೊಂಡು ಯಶಸ್ಸು ಕಂಡು ರಾಜ್ಯ, ರಾಷ್ಟ್ರದಲ್ಲಿ ಮಾದರಿ ಎನಿಸಿವೆ.

1972 ರ ಮಾ.29ರಂದು ನಡೆದ ಮೊದಲ ವಿವಾಹ ಕಾರ್ಯಕ್ರಮದಲ್ಲಿ 88 ಜೋಡಿ ವಿವಾಹವಾದರು. ಮೇ 1ರಂದು ನಡೆಯುವ 48ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 102 ಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿದ್ದಾರೆ. ಕಳೆದ 47 ವರ್ಷ ಗಳಲ್ಲಿ ಕ್ಷೇತ್ರದಲ್ಲಿ ನಡೆದ ವಿವಾಹಗಳಲ್ಲಿ 12,260 ಜೋಡಿಗಳು ಸತಿಪತಿಗಳಾಗಿ ಸುಖೀ ದಾಂಪತ್ಯ ಜೀವನ ಹೊಂದಿದ್ದಾರೆ.

6 ಕಿಮೀ ನಡೆದು ಶಾಲೆಗೆ ಹೋಗಿ ಗೆದ್ದು ಬಂದಳು

22 ಕಿ. ಮೀ ದೂರ ಶಾಲೆ. ದಿನಾ ಆರು ಕಿ.ಮೀ ನಡಿಗೆ. ಆಗಾಗ ಕೈಕೊಡುವ ವಿದ್ಯುತ್. ಇಂತಹ ಪರಿಸ್ಥಿತಿಯಲ್ಲೂ ಛಲದಿಂದ ಓದಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಸುಬ್ರಹ್ಮಣ್ಯ ಸಮೀಪದ ಕೇನ್ಯದ ಕೃಪಾ ಕೆ. ಆರ್. ಅವರ ಸಾಧನೆ ಸಿಟಿಯಲ್ಲಿ ಓದುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ಸಿಟಿಯಲ್ಲಿ ಶಾಲೆಗೆ ಬಸ್, ರಿಕ್ಷಾದಲ್ಲಿ ಕರೆದುಕೊಂಡು ಹೋದರೂ ಇಂತಹ ಮಾರ್ಕ್ಸ್ ಪಡೆದುಕೊಂಡಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಾವಳಿ ಯಾಕೆ ಇಳಿಯಿತು

2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಏಳನೇ ಹಾಗೂ ಉಡುಪಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ ಉಡುಪಿ ನಾಲ್ಕು ಸ್ಥಾನ ಕೆಳಗಿಳಿದಿದೆ. ದಕ್ಷಿಣ ಕನ್ನಡ 2018ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳುವಂತಾಗಿದೆ.

ಪಿಯುಸಿ ಉತ್ತಮ ಫಲಿತಾಂಶವನ್ನೇ ಪಡೆದುಕೊಂಡಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಅಗ್ರಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹಾಸನ ಪ್ರಥಮ ಹಾಗೂ ರಾಮನಗರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮಂಗಳೂರಿನ ಈ ಶಾಲೆಗೆ ರಾತ್ರಿ ಮಾತ್ರ ವಿದ್ಯಾರ್ಥಿಗಳು ಬರುತ್ತಾರೆ !

ಇದು ದ.ಕ.ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಬಹಳ ಅಪರೂಪದ ಶಾಲೆಯಿದು. ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಫೀಸ್ ಕಟ್ಟಲು ಇಲ್ಲ. ಜತೆಯಲ್ಲಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳೆಲ್ಲರೂ ಕೆಲಸ ಮಾಡಿಕೊಂಡು ಉಳಿದ ರಾತ್ರಿ ಸಮಯದಲ್ಲಿ ವಿದ್ಯಾಭ್ಯಾಸ ಮಾಡಬಹುದು.
ಹೌದು. ಕಳೆದ 76 ವರ್ಷಗಳಿಂದ ನಿರಂತರವಾಗಿ ಮಂಗಳೂರಿನ ಬಿಇಎಂ ಸ್ಕೂಲ್‌ನ ನೇರ ಮುಂಭಾಗದಲ್ಲಿ ಸಾಗುವ ಗಾಯತ್ರಿ ದೇವಸ್ಥಾನದ ರಸ್ತೆಯಲ್ಲಿ ನವಭಾರತ ರಾತ್ರಿ ಹೈಸ್ಕೂಲ್ ನಡೆಯುತ್ತದೆ. ಮುಖ್ಯವಾಗಿ ಇಲ್ಲಿ ಒಂದನೇ ತರಗತಿಯಿಂದ ೧೦ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.
ಸಂಜೆ 6ರಿಂದ ಆರಂಭವಾಗುವ ತರಗತಿಗಳು 9ರ ವರೆಗೆ ಸಾಗುತ್ತದೆ. ಮುಖ್ಯವಾಗಿ ಕಲಿಯಲು ಯಾವುದೇ ವಯಸ್ಸು ಬೇಕಾಗಿಲ್ಲ ಎನ್ನುವುದಕ್ಕೆ ಇಲ್ಲಿಗೆ ಬರುವ ವಿದ್ಯಾರ್ಥಿಗಳೇ ಸಾಕ್ಷಿ. ಗುಮಾಸ್ತರು, ಗೃಹಿಣಿಯರು, ರಿಕ್ಷಾ ಚಾಲಕರು, ಹೋಟೆಲ್‌ನಲ್ಲಿ ದುಡಿಯುವ ಸಿಬ್ಬಂದಿಗಳು ಹೀಗೆ ತರೇವಾರಿ ವಿದ್ಯಾರ್ಥಿಗಳಿಂದ ಈ ಶಾಲೆ ನಡೆಯುತ್ತಿದೆ.