Tagged: Kudla

ಶಾಲೆ,ಕಾಲೇಜಿಗೆ ಮತ್ತೆ ಮಳೆಯ ರಜೆ ಆರಂಭ

ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಜು.23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಡ್ಲದಲ್ಲಿ ಸೊಳ್ಳೆ ಉತ್ಪಾದನೆ ಗೆ ಭರ್ಜರಿ ದಂಡ

ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರಪಾಲಿಕೆ ಅಧಿಕಾರಿಗಳು, ಶನಿವಾರ ಹಳೇ ಟಯರ್‍ಗಳಲ್ಲಿ ನೀರು ನಿಂತು ರೋಗಕ್ಕೆ ನೀಡುತ್ತಿದ್ದ ವ್ಯಕ್ತಿಗೆ ರೂ. 5000 ದಂಡ ವಿಧಿಸಿದೆ.
ಕಣ್ಣೂರಿನ ವ್ಯಕ್ತಿಯೊಬ್ಬರು ತನ್ನ ಆವರಣದಲ್ಲ ಹಳೆಯ ಟಯರ್‍ಗಳನ್ನು ಇಟ್ಟಿದ್ದು, ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ವ್ಯಕ್ತಿಗೆ ರೂ. 5000 ದಂಡ ಸ್ಥಳದಲ್ಲೇ ವಿಧಿಸಿ, ಎಚ್ಚರಿಕೆ ನೀಡಿದರು.

ಮನೆಯ ಕಿಚನ್ ವೇಸ್ಟ್ ಇಲ್ಲಿ ಲಿಕ್ವೀಡ್ ಗೊಬ್ಬರ

ತ್ಯಾಜ್ಯ ನಿರ್ವಹಣೆ ಈಗ ಎಲ್ಲೆಡೆ ಸಮಸ್ಯೆ ಆಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಯಂತೂ ನಿಮ್ಮ ತ್ಯಾಜ್ಯ ನಿಮ್ಮ ಜವಾಬ್ದಾರಿ ಎನ್ನುವ ಮಾತನ್ನು ಹೇಳುತ್ತಿದೆ. ಕುಡ್ಲದಲ್ಲಿ ಬದುಕುವ ಮುಕ್ಕಾಲು ಮಂದಿ ಪ್ಲ್ಯಾಟ್ ನಲ್ಲಿಯೇ ಉಳಿದು ಬಿಟ್ಟಿದ್ದಾರೆ. ಇವರಿಗೆ‌ ತಮ್ಮ ಮನೆಯ ತ್ಯಾಜ್ಯ ನಿರ್ವಹಣೆ ಮಾಡಲು ಇಲ್ಲೊಂದು ಸರಳ ಉಪಾಯದ ಮೂಲಕ ಉತ್ತಮವಾದ ತರಕಾರಿಯನ್ನು ಬೆಳೆಸಬಹುದು.

ಮಂಗಳಾದೇವಿ ನಗರದ ಬ್ಲ್ಯಾನಿ ಡಿಸೋಜ ತಾರಸಿ ಕೃಷಿಯಲ್ಲಿ ದೊಡ್ಡ ಹೆಸರು ಇದೇ ಕೃಷಿಯಿಂದ ವರ್ಷಕ್ಕೆ ಬರೋಬರಿ ಆದಾಯ ಪಡೆಯುತ್ತಿದ್ದಾರೆ. ಆದರೆ ಈ ಕೃಷಿಗೆ ತಮ್ಮ ಮನೆಯ ಕಿಚನ್ ವೇಸ್ಟ್ ವನ್ನು ಮಾತ್ರ ಬಳಸುತ್ತಾರೆ. ದಿನ ನಿತ್ಯ ಕಿಚನ್ ನಲ್ಲಿ ಉಳಿದ ಹಸಿ ತ್ಯಾಜ್ಯವನ್ನು ಮಿಕ್ಸಿಯಲ್ಲಿ ಹಾಕಿ ಬಳಿಕ ಅದನ್ನು ನೀರಿಗೆ ಸೇರಿಸುವ‌ ಕೆಲಸ ಮಾಡುತ್ತಾರೆ. ಈ ನೀರನ್ನು ಅವರು ತಮ್ಮ ತರಕಾರಿ, ಹಣ್ಣುಹಂಪಲು ಹೀಗೆ ಎಲ್ಲ ಕೃಷಿಗೆ ಬಳಸುತ್ತಾರೆ ಇದು ಬಹಳ ಒಳ್ಳೆಯ ಗೊಬ್ಬರವಂತೆ ವಾಸನೆಯೂ ಬರೋದಿಲ್ಲ. ಆದರೆ ನಾನ್ ವೆಜ್ ಐಟಂಗಳನ್ನು ಮಾತ್ರ ಈ ರೀತಿ ಮಾಡಲು ಸಾಧ್ಯವಿಲ್ಲ ಆದರೆ ಉಳಿದ ಬಹಳಷ್ಟು ವಸ್ತುಗಳನ್ನು ಗೊಬ್ಬರ ಮಾಡಬಹುದು.

ಕುಡ್ಲದಲ್ಲಿ ಡೆಂಗೆ ಜ್ವರಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿ

ಕುಡ್ಲದಲ್ಲಿ ಡೆಂಗೆಯ ಡಂಗುರ ಜೋರಾಗಿದೆ. ಕಳೆದ ಒಂದು ತಿಂಗಳ ಒಳಗಡೆ 320 ಕ್ಕೂ ಡೆಂಗೆ ಪಾಸಿಟಿವ್ ಪ್ರಕರಣ ಬರೀ ಕುಡ್ಲದಲ್ಲಿ ಕಾಣಿಸಿಕೊಂಡಿದೆ. ಇದರ ಜತೆಯಲ್ಲಿ ಕುಡ್ಲದಲ್ಲಿ ಯೇ ಈಗಾಗಲೇ ಮೂರು ಮಂದಿಯನ್ನು ಬಲಿ ಪಡೆದಿರುವ ಡೆಂಗೆ ಈ ಬಾರಿ ರಾಜ್ಯದಲ್ಲಿ ಯೇ ಅತೀ ಹೆಚ್ಚು ಪ್ರಕರಣ ಗಳು ಬರೀ ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಕಾಣಿಸಿಕೊಂಡಿದೆ.
ವಿಶೇಷವಾಗಿ ಮಂಗಳೂರಿನ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುವ ವಿದ್ಯಾರ್ಥಿ ಯೊಬ್ಬರು ಬುಧವಾರ ಮೃತಪಟ್ಟರೆ ಗುರುವಾರ ಏಳನೇ ತರಗತಿ ಓದುವ ವಿದ್ಯಾರ್ಥಿನಿ ಯೊಬ್ಬರು ಮೃತ ರಾಗಿದ್ದಾರೆ. ಆರೋಗ್ಯ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಇಳಿಯದೇ ಇರುವುದರ ಜತೆಗೆ ಜನರಲ್ಲಿ ಆರೋಗ್ಯ ಕಾಳಜಿ ಇಲ್ಲದೇ ಇರುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ಕರಾವಳಿ ಸ್ವಾಮೀಜಿಗೆ ನಮೋ ಗುರುವಂದನೆ

ಉಡುಪಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಗುರು ಪೂರ್ಣಿಮಾ ದ ಅಂಗವಾಗಿ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ಉಡುಪಿ ಕೃಷ್ಣ ನ ಪ್ರತಿಮೆ ಪ್ರಭಾವಳಿಯನ್ನು ನೀಡುವ ಮೂಲಕ ಉತ್ತಮ ಸರಕಾರಕ್ಕೆ ಶುಭ ಹಾರೈಸಿದರು.