Author: Team Kudla City

ಬಳಸಿದ ಪ್ಲಾಸ್ಟಿಕ್ ಗೆ ದುಡ್ಡು ಕೊಡುವ ಜಯಣ್ಣ!

ಇಡೀ ವಿಶ್ವವೇ ಪ್ಲಾಸ್ಟಿಕ್ ಕುರಿತು ತಲೆ ಕಡೆಸಿಕೊಂಡಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ನಮ್ಮ ಅವಿಭಾಜ್ಯ ಅಂಗವಾಗಿ ಹೋಗುತ್ತಿದೆ. ಇಂತಹ ಪ್ಲಾಸ್ಟಿಕ್ ಬಳಕೆಯ ವಿರುದ್ದ ಶ್ರೀಸಾಮಾನ್ಯರೊಬ್ಬರು ಡಿಫರೆಂಟ್ ಶೈಲಿಯಲ್ಲಿ ಹೋರಾಟ ಮಾಡಿದ್ದಾರೆ. ಇವರ ಹೆಸರು ಜಯಪ್ರಕಾಶ್ ಎಕ್ಕೂರು .

ಕಂಕನಾಡಿ ಹತ್ತಿರ ಪುಟ್ಟದಾದ ಲಾಂಡ್ರಿ ಶಾಫ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಅವರು ಪ್ಲಾಸ್ಟಿಕ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರು ಒಂದು ಬಳಸಿದ ಪ್ಲಾಸ್ಟಿಕ್ ಗೆ ಐವತ್ತು ಪೈಸೆ ನೀಡುತ್ತಾರೆ. ಒಬ್ಬರು ಎರಡು ಪ್ಲಾಸ್ಟಿಕ್ ಮಾತ್ರ ನೀಡಬಹುದು. ಎರಡು ಪ್ಲಾಸ್ಟಿಕ್ ಗೆ ಒಂದು ರೂಪಾಯಿ ಕೊಟ್ಟು ಖರೀದಿ ಮಾಡಿ ಅದನ್ನು ನಗರಪಾಲಿಕೆ ಗೆ ಕೊಟ್ಟು ಬಿಡುತ್ತಾರೆ ಅದರಿಂದ ಅವರಿಗೆ ಏನೂ ಲಾಭ ವಿಲ್ಲ. ಇದರ ಜತೆಯಲ್ಲಿ ಅವರ ಪರಿಸರ ಸ್ನೇಹಿ ಪೆನ್, ಬಟ್ಟೆ ಚೀಲ ಹೀಗೆ ಪರಿಸರ ಪೂರಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಇದು ಅವರ ಲಾಭದ ಬ್ಯುಸಿನೆಸ್ ಅಲ್ಲ. ಆದರೆ ಇಂತಹ ವಿಚಾರದಿಂದ ಜನರಲ್ಲಿ ಪರಿಸರ ಕಾಳಜಿ ಬೆಳೆಸುವುದು ಅವರ ಉದ್ದೇಶ. ಅವರಲ್ಲಿ ನೂರು ರೂಪಾಯಿ ಯ ಐಟಂ ತೆಗೆದುಕೊಂಡರೆ ಶೇ.10ರಷ್ಟು ಬಳಸಿದ ಪ್ಲಾಸ್ಟಿಕ್ ಕೊಟ್ಟರೆ ಸಾಕು ನಂತರ 90 ರೂ ಕೊಟ್ಟು ಐಟಂ ತೆಗೆದುಕೊಳ್ಳಬಹುದು. ಕುಡ್ಲದ ಕದ್ರಿ ಪಾರ್ಕ್ ಮುಂಭಾಗ ಪ್ರತಿ ಭಾನುವಾರ ಸಂಜೆ ಹೊತ್ತು ಕಾಣಿಸಿಕೊಳ್ಳಲಿದ್ದಾರೆ.

ಮಂಗಳೂರು-ವಿಜಯಪುರ ರೈಲು ಕುಡ್ಲಕ್ಕೆ ಬಂತು

ಮಂಗಳೂರು-ವಿಜಯಪುರ ನಡುವೆ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಂಗಳವಾರ ಸಂಜೆ ಆರಂಭಗೊಂಡ ಸೂಪರ್ ಫಾಸ್ಟ್ ತತ್ಕಾಲ್ ಎಕ್ಸ್‌ಪ್ರೆಸ್ ಪ್ರಥಮ ರೈಲು ಪ್ರಯಾಣಕ್ಕೆ ನಿಲ್ದಾಣದಲ್ಲಿ ಬಹಳಷ್ಟು ಮಂದಿ ಸಾಕ್ಷಿಯಾದರು. ವಿಜಯಪುರದಿಂದ ಸೋಮವಾರ ಸಂಜೆ ಹೊರಟು ಮಂಗಳವಾರ ಮಂಗಳೂರು ತಲುಪಿದ ರೈಲಿಗೆ ಹಾದಿಯುದ್ದಕ್ಕೂ ನಾನಾ ನಿಲ್ದಾಣಗಳಲ್ಲಿ ಸಂಭ್ರಮದ ಸ್ವಾಗತ ದೊರೆಯಿತು.
ಮೊದಲ ರೈಲು ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಹಳಷ್ಟು ಮಂದಿಗೆ ಈ ರೈಲಿನ ಪ್ರಯಾಣದ ಕುರಿತು ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಈ ರೀತಿ ನಡೆದಿದೆ. ಮುಂದೆ ದಿನ ಕಳೆದಂತೆ ಇದೆಲ್ಲವೂ ಸರಿಯಾಗಲಿದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹೊಸ ರೈಲು ಸೇವೆಯಿಂದ ಉತ್ತರ ಕರ್ನಾಟಕಕ್ಕೆ ಕನಿಷ್ಠ ಪ್ರಯಾಣ ದರದಲ್ಲಿ ಸುಲಭ ಸಂಪರ್ಕ ದೊರೆಯಲಿದೆ. ಪ್ರಸ್ತುತ ದಕ್ಷಿಣ ಕನ್ನಡ ಅಥವಾ ಉಡುಪಿ ನಗರದಿಂದ ಹುಬ್ಬಳ್ಳಿ- ಧಾರವಾಡ- ಬೆಳಗಾಂಗೆ ಯಾವುದೇ ನೇರ ರೈಲು ಸಂಪರ್ಕವಿರುವುದಿಲ್ಲ. ಹೊಸ ರೈಲಿನಿಂದ ಗದಗ, ಚಿತ್ರದುರ್ಗ, ವಿಜಾಪುರ, ಧಾರವಾಡ, ಹೈದರಾಬಾದ್, ತಿರುಪತಿ ಸಂಪರ್ಕಕ್ಕೆ ಕೂಡ ಅನುಕೂಲಕರವಾಗಿದೆ.
tgas: Vijayapura, Bijapur, Mangaluru, Hubballi, Arsikere, Hassan, Central, Karnataka, regions, coastal belt, South Western Railway, daily train

ವಿದ್ಯಾರ್ಥಿಗಳಿಂದ ಸಂತ ಆಂತೋನಿ ಆಶ್ರಮ ಭೇಟಿ

ಇಂದಿನ ವಿದ್ಯಾರ್ಥಿಗಳಿಗೆ ಆಶ್ರಮ ವಾಸಿಗಳ ಪರಿಚಯವೇ ಇರುವುದಿಲ್ಲ. ಓದು, ಕಲಿಕೆ ಜತೆಗೆ ಮೊಬೈಲ್ ಎನ್ನುವ ಜಂಗಮದೊಂದಿಗೆ ಆಟ ಬಿಟ್ಟರೆ ಉಳಿದ ಎಲ್ಲ ವಿಚಾರಗಳಲ್ಲಿಯೂ ಅವರು ಉತ್ಸಾಹ ತೋರಿಸುವುದೇ ಕಡಿಮೆ.
ಆಶ್ರಮವಾಸಿಗಳ ಬದುಕು, ಬವಣೆ, ಕಷ್ಟ- ಸುಖಗಳನ್ನು ಹತ್ತಿರದಿಂದ ನೋಡುವ ಜತೆಗೆ ಅವರ ಜತೆಯಲ್ಲಿ ಸ್ವಲ್ಪ ಕಾಲ ಕಳೆಯುವ ಈ ಮೂಲಕ ಅಶ್ರಮದಲ್ಲಿ ವಾಸವಾಗಿರುವ ಮೊಗದಲ್ಲಿ ನೆಮ್ಮದಿ ತರುವ ಕೆಲಸವೊಂದು ನಡೆದಿದೆ.
ಹೌದು. ಮಂಗಳೂರಿನ ಸಂತ ಆಂತೋನಿ ಆಶ್ರಮ ಜೆಪ್ಪುವಿಗೆ ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಮೊಂಟೆಸರಿಯಿಂದ ಹತ್ತನೇ ತರಗತಿಯ ವರೆಗಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿ ತಾವು ಆಶ್ರಮವಾಸಿಗಳಿಗೆ ತಂದ ಉಡುಗೊರೆಯನ್ನು ಕೊಟ್ಟು ಆಶ್ರಮವಾಸಿಗಳನ್ನು ಖುಷಿ ಪಡಿಸಿದರು.

ಹಣಕಾಸು ಸಚಿವರಿಂದ ಪದಕ ಪಡೆದ ಕುಡ್ಲದ ಮಿಶೆಲ್ !

ಕುಡ್ಲದ ನೀರುಡೆ ಕಲ್ಲಮುಂಡ್ಕೂರಿನ ಮಿಶೆಲ್ ಕ್ವೀನಿ ಡಿಕೋಸ್ತಾ ಅವರ ಕೆಲಸವನ್ನು ನೋಡಿ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪದಕ ನೀಡಿ ಗೌರವಿಸಿದ್ದಾರೆ.

ಅರೇ ಯಾರಿದು ಮಿಶೆಲ್ ಎನ್ನುತ್ತೀರಾ..? ಮಿಶೆಲ್ ನೀರುಡೆಯ ಕಲ್ಲಮುಂಡ್ಕೂರಿನ ಲಾಜರಸ್ ಡಿ ಕೋಸ್ತಾ ಮತ್ತು ನ್ಯಾನ್ಸಿ ಡಿ ಕೋಸ್ತಾ ದಂಪತಿಗಳ ಎರಡನೇ ಮಗಳು. ಮೂಲತಃ ಕೃಷಿ ಕುಟುಂಬದಿಂದ ಬೆಳೆದು ಬಂದ ಹುಡುಗಿ ಮಿಶೆಲ್ 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೇ ರ‍್ಯಾಂಕ್‌ಗಳಿಸಿಕೊಂಡು ನಾಗರಿಕ ಸೇವೆಯಲ್ಲಿ ಐಆರ್‌ಎಸ್ ಮಾಡುತ್ತಿದ್ದಾರೆ.

ಇದರ ಪಾಸಿಂಗ್ ಔಟ್ ಕಾರ‍್ಯಕ್ರಮದಲ್ಲಿ ವಿಶೇಸ ಸಾಧನೆ ಮಾಡಿದ ಮಿಶೆಲ್‌ಗೆ ಖುದ್ದು ಹಣಕಾಸು ಸಚಿವರು ಪದಕ ನೀಡಿ ಗೌರವಿಸಿದ್ದಾರೆ. ಇದು ಕುಡ್ಲದ ಪ್ರತಿಯೊಬ್ಬ ಹೆಣ್ಣು ಮಗಳು ಸಾಧನೆಗೆ ಸಂದ ಗೆಲುವು ಎನ್ನಬೇಕು. ಮಿಶೆಲ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಗಿಸಿದವರು.

ಆನ್‌ಲೈನ್‌ನ ಸೆಕೆಂಡ್ ಸೇಲ್‌ನಲ್ಲಿ ಹಣ ಮಂಗಮಾಯ

ಆನ್‌ಲೈನ್‌ನಲ್ಲಿ ಸೆಕೆಂಡ್ ಸೇಲ್ ಪೀಠೋಪಕರಣಗಳನ್ನು ಮಾರಾಟ ಮಾಡುವುದಾಗಿ ಕುಡ್ಲದ ವ್ಯಕ್ತಿಯೊಬ್ಬರು ಬ್ರೋಕರ್ ಮುಖೇನ ಜಾಹೀರಾತು ಹಾಕಿದ್ದರು. ಇದಕ್ಕೆ ತಮಗೆ ಬೇಕು ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ಸಾಮಗ್ರಿಯನ್ನು ಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಪೀಠೋಪಕರಣ ಖರೀದಿ ಮೊತ್ತವನ್ನು ಆನ್‌ಲೈನ್ ಮೂಲಕ ಕಳುಹಿಸುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದ. ಅದರಂತೆ ಪಿರ್ಯಾದಿದಾರರು ಲಿಂಕ್ ಒತ್ತಿದ್ದು, ತಕ್ಷಣ ಕ್ರಮವಾಗಿ ಅವರ ಖಾತೆಯಿಂದ 80 ಸಾವಿರಕ್ಕೂ ಅಧಿಕ ಮೊತ್ತವನ್ನು ಪೀಠೋಪಕರಣ ಸೇಲ್ ಮಾಡುವ ವ್ಯಕ್ತಿ ಕಳೆದುಕೊಂಡು ಮೂರು ನಾಮಹಾಕಿದ ಘಟನೆಯೊಂದು ವರದಿಯಾಗಿದೆ.