ಇಡೀ ವಿಶ್ವವೇ ಪ್ಲಾಸ್ಟಿಕ್ ಕುರಿತು ತಲೆ ಕಡೆಸಿಕೊಂಡಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ನಮ್ಮ ಅವಿಭಾಜ್ಯ ಅಂಗವಾಗಿ ಹೋಗುತ್ತಿದೆ. ಇಂತಹ ಪ್ಲಾಸ್ಟಿಕ್ ಬಳಕೆಯ ವಿರುದ್ದ ಶ್ರೀಸಾಮಾನ್ಯರೊಬ್ಬರು ಡಿಫರೆಂಟ್ ಶೈಲಿಯಲ್ಲಿ ಹೋರಾಟ ಮಾಡಿದ್ದಾರೆ. ಇವರ ಹೆಸರು ಜಯಪ್ರಕಾಶ್ ಎಕ್ಕೂರು .
ಕಂಕನಾಡಿ ಹತ್ತಿರ ಪುಟ್ಟದಾದ ಲಾಂಡ್ರಿ ಶಾಫ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಅವರು ಪ್ಲಾಸ್ಟಿಕ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರು ಒಂದು ಬಳಸಿದ ಪ್ಲಾಸ್ಟಿಕ್ ಗೆ ಐವತ್ತು ಪೈಸೆ ನೀಡುತ್ತಾರೆ. ಒಬ್ಬರು ಎರಡು ಪ್ಲಾಸ್ಟಿಕ್ ಮಾತ್ರ ನೀಡಬಹುದು. ಎರಡು ಪ್ಲಾಸ್ಟಿಕ್ ಗೆ ಒಂದು ರೂಪಾಯಿ ಕೊಟ್ಟು ಖರೀದಿ ಮಾಡಿ ಅದನ್ನು ನಗರಪಾಲಿಕೆ ಗೆ ಕೊಟ್ಟು ಬಿಡುತ್ತಾರೆ ಅದರಿಂದ ಅವರಿಗೆ ಏನೂ ಲಾಭ ವಿಲ್ಲ. ಇದರ ಜತೆಯಲ್ಲಿ ಅವರ ಪರಿಸರ ಸ್ನೇಹಿ ಪೆನ್, ಬಟ್ಟೆ ಚೀಲ ಹೀಗೆ ಪರಿಸರ ಪೂರಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ.
ಇದು ಅವರ ಲಾಭದ ಬ್ಯುಸಿನೆಸ್ ಅಲ್ಲ. ಆದರೆ ಇಂತಹ ವಿಚಾರದಿಂದ ಜನರಲ್ಲಿ ಪರಿಸರ ಕಾಳಜಿ ಬೆಳೆಸುವುದು ಅವರ ಉದ್ದೇಶ. ಅವರಲ್ಲಿ ನೂರು ರೂಪಾಯಿ ಯ ಐಟಂ ತೆಗೆದುಕೊಂಡರೆ ಶೇ.10ರಷ್ಟು ಬಳಸಿದ ಪ್ಲಾಸ್ಟಿಕ್ ಕೊಟ್ಟರೆ ಸಾಕು ನಂತರ 90 ರೂ ಕೊಟ್ಟು ಐಟಂ ತೆಗೆದುಕೊಳ್ಳಬಹುದು. ಕುಡ್ಲದ ಕದ್ರಿ ಪಾರ್ಕ್ ಮುಂಭಾಗ ಪ್ರತಿ ಭಾನುವಾರ ಸಂಜೆ ಹೊತ್ತು ಕಾಣಿಸಿಕೊಳ್ಳಲಿದ್ದಾರೆ.