Tagged: mangalore

ಸರಕಾರಿ ಶಾಲೆಗೆ ಬಲಕೊಟ್ಟ ಜೋಳದ ರೊಟ್ಟಿ

ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ನಾನಾ ಹೆಸರುಗಳಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬ. ಕರಾವಳಿಯ ಗ್ರಾಮೀಣ ಭಾಗದ ಶಾಲೆಯ ಆರ್ಥಿಕತೆಗೆ ಮುನ್ನುಡಿ ಬರೆಯಲು ಸಾಧ್ಯವಾಗಿದೆ. ಸಂಕ್ರಾಂತಿ ಹಬ್ಬದ ದಿನವೇ ಸರಕಾರಿ ಶಾಲೆಯಲ್ಲಿ ಜೋಳದ ರೊಟ್ಟಿ ಮಾಡುವ ಮೂಲಕ ಅಡುಗೆ ಸಿಬ್ಬಂದಿಗಳ ವೇತನದ ಜತೆಗೆ ಶಾಲೆಯನ್ನು ಬಲಪಡಿಸುವ ಕಾರ್ಯವಾಗುತ್ತಿದೆ.

ಹೌದು. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ `ಕಟ್ಟತ್ತಿಲ’ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆರ್ಥಿಕ ಬಲಕ್ಕಾಗಿ ಜೋಳದ ರೊಟ್ಟಿಯನ್ನು ನೆಚ್ಚಿಕೊಂಡಿದ್ದಾರೆ. ಇದಕ್ಕೆ ಸಾಥ್ ಕೊಟ್ಟವರು ಕರಸೇವಾ ಟ್ರಸ್ಟ್ ಎನ್ನುವ ವೈದ್ಯ ವಿದ್ಯಾರ್ಥಿಗಳು. ಸಂಕ್ರಾಂತಿ ಹಬ್ಬದಂದು ಈ ಜೋಳದ ರೊಟ್ಟಿ ಯೋಜನೆಗೆ ಚಾಲನೆ ನೀಡುವ ಕಾರ್ಯವಾಗಿದೆ.

ಸಾಲೆತ್ತೂರಿನಿಂದ ಐದಾರು ಕಿಮೀ ದೂರದಲ್ಲಿರುವ ಕಟ್ಟತ್ತಿಲ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಹಳಷ್ಟು ಹಳ್ಳಗಾಡಿನಲ್ಲಿರುವ ಶಾಲೆ. ವಿಶೇಷವಾಗಿ ಮಕ್ಕಳ ಕೊರತೆ, ಮೂಲಭೂತ ಸವಲತ್ತುಗಳ ಸಮಸ್ಯೆಯಿಂದಾಗಿ ಶಾಲೆ ಬಹಳಷ್ಟು ಸಂಕಷ್ಟಕ್ಕೆ ಬಿದ್ದಿತ್ತು. 2016ರ ಹೊತ್ತಿನಲ್ಲಿ 17 ಮಕ್ಕಳು ಇದ್ದ ಶಾಲೆ ನಂತರದ ದಿನಗಳಲ್ಲಿ 35ಕ್ಕೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ವಿಶೇಷವಾಗಿ ಕರ ಸೇವಾ ಟ್ರಸ್ಟ್ ಎನ್ನುವ ವೈದ್ಯ ವಿದ್ಯಾರ್ಥಿಗಳ ಎನ್‍ಜಿಒ ಸಂಸ್ಥೆ ಈ ಶಾಲೆಯನ್ನು ನೆಚ್ಚಿಕೊಂಡ ಬಳಿಕದಿಂದ ಶಾಲೆ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕಿದೆ.

ಕರ ಸೇವಾ ಟ್ರಸ್ಟ್ ಎನ್ನುವುದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನೆಪೆÇೀಯ ಮೆಡಿಕಲ್ ಕಾಲೇಜಿನಲ್ಲಿ ಕಲಿಯುವ ಎಂಟು ಮಂದಿ ವಿದ್ಯಾರ್ಥಿಗಳ ತಂಡದ ಸಂಸ್ಥೆ. ಇದರ ಅಧ್ಯಕ್ಷ ಡಾ. ಅನುಮೋಲ್ ಹೇಳುವಂತೆ ಆರಂಭದಲ್ಲಿ ಶಾಲೆಯಲ್ಲಿ ಯಾವುದೇ ಸವಲತ್ತು ಇರಲಿಲ್ಲ. ನಾವು ಶುಕ್ರವಾರ ಮಧ್ಯಾಹ್ನದ ಬಳಿಕ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸೇರಿದಂತೆ ಇತರ ಕೆಲಸಗಳಿಗೆ ಹೋಗುತ್ತಿದ್ದೇವು ದಾನಿಗಳ ನೆರವಿನಿಂದ ಬಾವಿ, ಶಾಲೆಗೆ ಬಣ್ಣ ಕೊಡುವ ಜತೆಯಲ್ಲಿ ಇತರ ಕೆಲಸಗಳನ್ನು ಮಾಡುತ್ತಾ ಬಂದೇವು ಆದರೆ ಪ್ರತಿ ಬಾರಿಯೂ ದಾನಿಗಳಲ್ಲಿ ನೆರವು ಬೇಡುವ ಕೆಲಸ ಕಷ್ಟವಾಗುತ್ತಿತ್ತು. ಇದಕ್ಕಾಗಿ ರಾಜ್ಯದ ಪ್ರತಿಷ್ಠಿತ ಗಣ್ಯರಿಗೆ ಹಾಗೂ ದಾನಿಗಳ ಇಮೇಲ್ ತೆಗೆದುಕೊಂಡು ಅವರಿಗೆ ಮೇಲ್ ಕಳುಹಿಸಲಾಯಿತು. ಆದರೆ ಸೆಲ್ಕೋ ಸಂಸ್ಥೆಯ ಹರೀಶ್ ಹಂದೆ ಇದಕ್ಕೆ ಪ್ರತಿಸ್ಪಂಧಿಸಿದರು ಎನ್ನುತ್ತಾರೆ ಅವರು.
ಹೀಗೆ ಅವರಿಂದ ರಿಪ್ಲೈ ಬಂದ ಬಳಿಕ ಅವರ ತಂಡ ಈ ಶಾಲೆಗೆ ಬಂದು ಪರಿಶೀಲನೆ ಮಾಡಿತು. ಸುತ್ತಮುತ್ತಲಿನ ಜನರನ್ನು ಮಾತನಾಡಿಸಿಕೊಂಡು ಏನೂ ಮಾಡಿದರೆ ಉತ್ತಮ ಎನ್ನುವ ವಿಚಾರವನ್ನು ತಿಳಿದುಕೊಂಡಿತು. ಈ ಬಳಿಕ ಸಂಸ್ಥೆ ಜೋಳದ ರೊಟ್ಟಿ ತಯಾರಿಸಿದರೆ ಒಳ್ಳೆಯ ಆದಾಯ ವೃದ್ಧಿಯಾಗಬಹುದು ಎನ್ನುವುದನ್ನು ಅರಿತು ನಮ್ಮನ್ನು ಸಂಪರ್ಕ ಮಾಡಿತು. ಕರಾವಳಿಯಲ್ಲಿ ಜೋಳದ ರೊಟ್ಟಿ ತಿನ್ನುವವರು ಕಡಿಮೆ ಅದಕ್ಕಾಗಿ ಯೆನೆಪೆÇೀಯ ಆಸ್ಪತ್ರೆಗೆ ದಿನನಿತ್ಯನೂ ಉತ್ತರ ಕರ್ನಾಟಕ ಭಾಗದಿಂದ ರೋಗಿಗಳು ಬರುತ್ತಾರೆ. ಅವರ ಜತೆಯಲ್ಲಿ ಯಾರಾದರೂ ಬಂದೇ ಬರುತ್ತಾರೆ. ಇದಕ್ಕಾಗಿ ಯೆನೆಪೆÇೀಯ ವಿವಿಯ ಕ್ಯಾಂಟೀನ್‍ಗೆ ಈ ಜೋಳದ ರೊಟ್ಟಿಯನ್ನು ನೀಡಿದರೆ ಶಾಲೆಗೂ, ಅಡುಗೆ ಕೆಲಸದವರಿಗೂ ಲಾಭವಾಗುತ್ತದೆ ಎನ್ನುವ ದೃಷ್ಟಿಯಿಂದ ಜೋಳದ ರೊಟ್ಟಿ ಮಾಡುವ ಯೋಜನೆಗೆ ಸಂಕ್ರಾಂತಿಯಂದು ಚಾಲನೆ ನೀಡಲಾಯಿತು ಎನ್ನುವುದು ಡಾ. ಅನ್‍ಮೋಲ್ ಮಾತು. ಜೋಳದ ರೊಟ್ಟಿಯ ಯಂತ್ರಕ್ಕೆ ಕರಾ ಸೇವಾ ಟ್ರಸ್ಟ್‍ನಿಂದ 32 ಸಾವಿ ರೂ. ಖರ್ಚು ಮಾಡಲಾಗಿದೆ. ಸೆಲ್ಕೋ ಅವರು ಸೋಲಾರ್ ಯಂತ್ರವನ್ನು ಅದಕ್ಕೆ ನೀಡುವ ಮೂಲಕ 32 ಸಾವಿರ ರೂ. ಖರ್ಚು ಮಾಡಿದ್ದಾರೆ. ಒಟ್ಟು 64 ಸಾವಿರ ರೂ. ಖರ್ಚುಮಾಡಲಾಗಿದೆ. ಉಳಿದಂತೆ ಸೋಲಾರ್ ಲೈಟ್‍ಗಳನ್ನು ಶಾಲೆಗೆ ಹಾಕಲಾಗಿದೆ ಎನ್ನುತ್ತಾರೆ ಅವರು.

ಕಟ್ಟತ್ತಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಚಿತ್ರಕಲಾ ಅವರು ಹೇಳುವಂತೆ ಈಗ 1ರಿಂದ 5ರ ವರೆಗೆ ತರಗತಿ ಇದೆ. ಮುಂದೆ ಹೆಚ್ಚುವರಿ ತರಗತಿಗೆ ಮನವಿ ಮಾಡಲಾಗಿದೆ. ಇರುವ ಅಡುಗೆ ಮನೆಯಲ್ಲಿಯೇ ಜೋಳದ ರೊಟ್ಟಿ ಮಾಡುವ ಯಂತ್ರವನ್ನು ಇಡಲಾಗಿದೆ. ಅಡುಗೆ ಸಿಬ್ಬಂದಿಯೊಬ್ಬರು ಮಕ್ಕಳಿಗೆ ಊಟ ನೀಡಿದ ಬಳಿಕ ಈ ಜೋಳದ ರೊಟ್ಟಿಯ ಕೆಲಸ ಮಾಡುತ್ತಾರೆ. ಅವರಿಗೆ ಮತ್ತೊಬ್ಬ ಮಹಿಳೆ ಸಾಥ್ ಕೊಡಲಿದ್ದಾರೆ. ಈಗಾಗಲೇ ರೊಟ್ಟಿಯನ್ನು ಮಾಡಿಕೊಂಡು ಯೆನೆಪೆÇೀಯ ಕ್ಯಾಂಟೀನ್‍ಗೆ ನೀಡುವ ಕೆಲಸ ಮಾಡಲಿದ್ದೇವೆ. ಈ ಮೂಲಕ ಶಾಲೆ ಆರ್ಥಿಕವಾಗಿ ಬಲಗೊಳ್ಳುವ ಜತೆಗೆ ಅಡುಗೆ ಸಿಬ್ಬಂದಿಗೂ ಕೊಂಚ ಆದಾಯವಾಗುತ್ತದೆ. ಶಾಲೆಯ ಮಕ್ಕಳಿಗೆ ವ್ಯಾನ್ ಮಾಡಿಸಿದ್ದೇವೆ ಜತೆಗೆ ಅನ್‍ಲೈನ್ ಇಂಗ್ಲೀಷ್ ಕೋಚಿಂಗ್ ಕೂಡ ನೀಡಲಾಗುತ್ತಿದೆ ಇದರ ಜತೆಯಲ್ಲಿ ಯೂನಿಫಾರ್ಮ್ ಕೂಡ ಮಕ್ಕಳಿಗೆ ನೀಡಿದ್ದೇವೆ ಎನ್ನುತ್ತಾರೆ ಅವರು. ಒಟ್ಟಾರೆ ಸರಕಾರಿ ಶಾಲೆಯೊಂದನ್ನು ಬಲಗೊಳಿಸಲು ಶಾಲೆಯ ಶಿಕ್ಷಕರ ಜತೆಗೆ ಯುವಜನತೆಯ ಕೆಲಸವಂತೂ ಶ್ಲಾಘನೀಯ.

ಪಕ್ಷಿಗಳಿಗೆ ನೀರು ಕೊಟ್ಟ ತೌಸಿಫ್‍ರ ಪ್ರಾಜೆಕ್ಟ್ ಜಲ್

ಕರಾವಳಿ ಭಾಗದಲ್ಲಿ ಉರಿ ಬಿಸಿಲು ಏರುತ್ತಿದ್ದು, ನದಿಗಳಲ್ಲಿನ ನೀರು ವಾಡಿಕೆಗಿಂತ ಮೊದಲೇ ಬತ್ತುತ್ತಿದೆ. ಕುಡಿಯಲು ನೀರಿಲ್ಲದೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ. ಹೀಗಿರುವಾಗ, ಮಂಗಳೂರಿನ ಪ್ರಾಣಿ ಪ್ರೇಮಿ ತೌಸಿಫ್ ಅಹಮ್ಮದ್ ಅವರು ತನ್ನ ಸ್ವಂತ ಖರ್ಚಿನಲ್ಲಿ ಸಿಮೆಂಟ್ ಮಡಕೆಗಳನ್ನು ಖರೀದಿ ಮಾಡಿ ಪ್ರಾಣಿ, ಪಕ್ಷಿಗಳಿಗೆಂದು ಅದರಲ್ಲಿ ನೀರು ತುಂಬಿಸಿ ನಗರದ ಅಲ್ಲಲ್ಲಿ ಇಡುವ ಪ್ರಯತ್ನಕ್ಕೆ ಮುಂದಾಗಿz್ದÁರೆ.
ಈ ಹೊಸ ಯೋಜನೆಗೆ ಪ್ರಾಜೆಕ್ಟï ಜಲ್ ಎಂದು ಹೆಸರಿಟ್ಟಿz್ದÁರೆ. ಈಗಾಗಲೇ 100 ಮಡಕೆಗಳು ತಯಾರಾಗುತ್ತಿದ್ದು, ಇವು ಹಳದಿ, ಹಸುರು ಮತ್ತು ಕೆಂಪು ಬಣ್ಣದಲ್ಲಿರಲಿವೆ. ಮುಂದಿನ ಎರಡು ವಾರದಲ್ಲಿ ನಗರದ ಅಲ್ಲಲ್ಲಿಗೆ ಮಡಕೆಗಳ ಸರಬರಾಜು ಪ್ರಕ್ರಿಯೆ ಆರಂಭವಾಗಲಿದೆ.
ಮುಖ್ಯವಾಗಿ ನಗರದ ಅಂಗಡಿಗಳ ಬದಿಗಳಲ್ಲಿ, ಮನೆಗಳ ಟೆರೇಸ್‍ನಲ್ಲಿ ಈ ಮಡಕೆ ಇಡಲಾಗುತ್ತದೆ. ಸಾರ್ವಜನಿಕರು ಈ ಮಡಕೆಗೆ ನೀರು ಹಾಕುವಂತೆ ಕೇಳಿಕೊಳ್ಳಲಾಗುತ್ತದೆ. ಇದರಿಂದ ಪಕ್ಷಿಗಳು, ದನ, ಬೀದಿ ನಾಯಿ ಸಹಿತ ಪ್ರಾಣಿಗಳು ಬಾಯಾರಿದಾಗ ನೀರು ಕುಡಿಯಲು ಸಾಧ್ಯ. ನೀರು ಮಡಕೆಯಲ್ಲಿರುವದರಿಂದ ಶುದ್ಧವಾಗಿರುತ್ತದೆ.

ಕಾಸರಗೋಡಿನ ಸರಕಾರಿ ಶಾಲೆಯಲ್ಲಿ ಒಂಬತ್ತು ಭಾಷೆಗಳ ಕಲರವ

ಸರಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ, ಇಂಗ್ಲಿಷ್ ಕಲಿಯುವುದು ಸಾಮಾನ್ಯ. ಆದರೆ ಕಾಸರಗೋಡು ಸಮೀಪದ ಪಾಂಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ತುಳು, ಕೊಂಕಣಿ, ಮರಾಠಿ ಸೇರಿದಂತೆ ಸುಮಾರು ಒಂಬತ್ತು ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತಿದೆ.

ಹಳ್ಳಿ ಪ್ರದೇಶದಲ್ಲಿರುವ ಪಾಂಡಿ ಶಾಲೆಯಲ್ಲಿ ಅಸೆಂಬ್ಲಿ ವೇಳೆ ತುಳು, ಕನ್ನಡ, ಮರಾಠಿ, ಕೊಂಕಣಿ, ಅರೇಬಿಕ್, ಮಲಯಾಳ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಯ ಸೊಗಡು ಹರಿಯುತ್ತದೆ. ನಾರಾಯಣ ದೇಲಂಪಾಡಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳ ವಿಕಸನಕ್ಕಾಗಿ ಈ ಕ್ಲಾಸ್ ಅಸೆಂಬ್ಲಿ ಎಂಬ ವಿನೂತನ ಯೋಜನೆ ಆರಂಭಿಸಿದ್ದರು.

ಈಗ ವಾರದಲ್ಲಿ ಎರಡು ದಿನ, ಸೋಮವಾರ ಮತ್ತು ಗುರುವಾರ ಶಾಲೆಯಲ್ಲಿ 9ಕ್ಕೂ ಹೆಚ್ಚು ಭಾಷೆಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಇಲ್ಲಿ 12ರ ವರೆಗೆ ತರಗತಿಗಳು ಇವೆಯಾದರೂ ಈ ಚಟುವಟಿಕೆಯನ್ನು 1-10ನೇ ತರಗತಿಯ ಮಕ್ಕಳಿಗೆ ಮಾತ್ರ ನಡೆಸಲಾಗುತ್ತಿದೆ.
ಬೆಳಗ್ಗಿನ ಪ್ರಾರ್ಥನೆ ಸಮಯದಲ್ಲಿ ಸುಮಾರು 12 ವಿದ್ಯಾರ್ಥಿಗಳು ಎದುರು ನಿಂತು ಒಂದೊಂದು ಭಾಷೆಯಲ್ಲಿ ಗೀತಾ ವಾಚನ, ವಾರ್ತೆಗಳು, ಪುಸ್ತಕ ಪರಿಚಯ, ಚಿಂತನೆ, ದಿನ ವಿಶೇಷ ಇತ್ಯಾದಿ ನಡೆಸುತ್ತಾರೆ. ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತೀ ಬಾರಿ ತರಗತಿ, ವಿದ್ಯಾರ್ಥಿಗಳು ಬದಲಾಗುತ್ತಾರೆ.

ಪಾಂಡಿ ಪ್ರೌಢಶಾಲೆಯು ಕಾಸರಗೋಡಿನಿಂದ ಸುಮಾರು 40 ಕಿ.ಮೀ., ಅಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಮುಖ್ಯ ಶಿಕ್ಷಕರಾಗಿದ್ದ ನಾರಾಯಣ ದೇಲಂಪಾಡಿ ಆರಂಭಿಸಿದ ಚಟುವಟಿಕೆಗಳು ಶಾಲೆಯ ಸ್ವರೂಪವನ್ನೇ ಬದಲಾಯಿಸಿವೆ.

ಮಕ್ಕಳು ಬೆಳೆಯಲು, ಬೀಳಲು ನಾವೇ ಹೊಣೆ: ಸ್ವಾಮೀಜಿ

ಮಕ್ಕಳು ಬೆಳೆಯಲೂ ನಾವೇ ಕಾರಣ, ಬೀಳಲೂ ನಾವೇ ಕಾರಣ. ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಎಲ್ಲರಿಗೂ ಇರಬೇಕು ಎಂದು ಮಂಗಳೂರು ಬಿಜಿಎಸ್ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮಾತು.
ಅವರು ಶನಿವಾರ ಕಾವೂರಿನ ಬಿಜಿಎಸ್ ಎಜುಕೇಶನ್ ಸೆಂಟರ್‍ನಲ್ಲಿ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಬಿಜಿಎಸ್ ಚುಂಚಾದ್ರಿ ಹಾಗೂ ಬಿಜಿಎಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕುಡ್ಲೋತ್ಸವ 2019 ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಬೆಳವಣಿಗೆಗೆ ಪೂರಕ ಪ್ರಯತ್ನ ಸಂಸ್ಥೆಯಿಂದ ನಡೆಯುತ್ತಾ ಇದೆ. ಶಿಕ್ಷಣದ ಕ್ರಾಂತಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕನಸನ್ನು ನಿಜಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳು ಕೆಡುವುದಿಲ್ಲ ಅವರು ಬಿಳಿ ಹಾಳೆ ಇದ್ದ ಹಾಗೆ ನಾವು ಏನು ಗೀಚುತ್ತೇವೊ ಅದು ಅಚ್ಚಾಗುತ್ತಾ ಹೋಗುತ್ತದೆ. ಸಂಸ್ಕಾರ, ಉತ್ತಮ ಶಿಕ್ಷಣ ಹಾಗೂ ಜೀವನ ಕೌಶಲ್ಯ ಈ ಬಗೆಯಲ್ಲಿ ನಾವೇನು ನೀಡುತ್ತೇವೆಯೊ ಅದು ಎಳೆಯರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಈ ಸಂದರ್ಭ ಮನಪಾ ಕಮೀಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ನಾಗಮಂಗಲ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಎನ್.ಎಸ್.ರಾಮೇಗೌಡ, ಎಜುಕೇಶನ್ ಸೆಂಟರ್‍ನ ವ್ಯವಸ್ಥಾಪಕ ಸುಬ್ಬ ಕಾರಡ್ಕ ಉಪಸ್ಥಿತರಿದ್ದರು.

ಕರಾವಳಿಯಲ್ಲಿ ನೀರುಳ್ಳಿ ದರ ಇಳಿಯಲು ಕಾರಣ ಏನೂ ಗೊತ್ತಾ?

ಕಳೆದ ಎರಡು ವಾರಗಳಿಂದ ನಿರಂತರವಾಗಿ ಗ್ರಾಹಕರಿಗೆ ಕಣ್ಣೀರು ತರಿಸಿದ ನೀರುಳ್ಳಿಯ ರೇಟ್ ನಿಧಾನವಾಗಿ ಇಳಿಮುಖವಾಗುತ್ತಾ ಸಾಗುತ್ತಿದೆ. ಎರಡು ವಾರಗಳಲ್ಲಿ 150 ರೂ. ದಾಖಲಿಸಿದ ರೇಟ್ ಈಗ 70ರಿಂದ 80 ರೂ.ಗೆ ಬಂದು ನಿಂತಿದೆ. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಎರಡು ವಾರಗಳಿಂದ ರೇಟ್ ಏರುಗತಿಯಲ್ಲಿಯೇ ಸಾಗುತ್ತಿತ್ತು.
ಆದರೆ ಸೋಮವಾರದಿಂದ ನಿಧಾನವಾಗಿ ನೀರುಳ್ಳಿಯ ದರ ಇಳಿಕೆಯ ಕಡೆಗೆ ಸಾಗಿದೆ. ಸೋಮವಾರ ಒಂದೇ ದಿನ 50 ರೂ. ಇಳಿಕೆಯಾದರೆ ಮತ್ತೆ ಉಳಿದ ದಿನಗಳಲ್ಲಿ ಸಾಧಾರಣವಾಗಿ 10 ರೂ. ನಂತೆ ಇಳಿಯುತ್ತಾ ಈಗ ಕೆಜಿ ನೀರುಳ್ಳಿಗೆ ಭರ್ತಿ 70ರಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಹಾಗೂ ಪುಣೆಯಿಂದ ನೀರುಳ್ಳಿ ಜಾಸ್ತಿಯಾಗಿ ಪೂರೈಕೆಯಾಗುತ್ತಿದ್ದಂತೆ ಇಲ್ಲಿ ದರ ಕುಸಿತ ಕಾಣುತ್ತಿದೆ. ಮುಂದಿನ ವಾರ ಮತ್ತಷ್ಟೂ ದರ ಕುಸಿತವಾಗುವ ನಿರೀಕ್ಷೆಯಿದೆ.